ಲೇಖನ ಚಿಹ್ನೆಗಳು


    ಬರವಣಿಗೆಯಲ್ಲಿ ಲೇಖನ ಚಿಂಹೆಗಳು ಮಾತ್ರ ಅತ್ಯಂತ ಮುಖ್ಯವಾದದ್ದು ಲೇಖನ ಚಿನ್ಹೆ ಇಲ್ಲದೆ ಬರವಣಿಗೆ ಸ್ಪಷ್ಟ ಅರ್ಥವನ್ನು ಕೊಡದೆ ಇದ್ದರೆ ತೊಡಕುಗಳು ತೊಂದರೆಗಳು ಉಂಟಾಗುತ್ತವೆ.ಆದ್ದರಿಂದ ಲೇಖನವನ್ನು ಓದುವಾಗ ಎಲ್ಲೆಲ್ಲಿ? ಎಷ್ಟೆಷ್ಟು? ಸಮಯ ನಿಲ್ಲಬೇಕು, ಧ್ವನಿಯ ಏರಿಳಿತ ಹೇಗಿರಬೇಕು ಮೊದಲಾದವುಗಳು ಓದುಗರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಲೇಖನ ಚಿಹ್ನೆಗಳನ್ನು ಬಳಸಲಾಗುತ್ತದೆ,ಇದರಿಂದ ಲೇಖನ ವಿಚಾರ ಓದುಗರ ಹೃದಯ ಮುಟ್ಟುತ್ತದೆ ಹೀಗಾಗಿ. ಬರವಣಿಗೆಯಲ್ಲಿ ಉಚಿತ ಸ್ಥಳದಲ್ಲಿ ಪೂರ್ಣ ನಿಲುಗಡೆ, ಅರ್ಧ ನಿಲುಗಡೆ, ಪ್ರಶ್ನೆ, ಅಚ್ಚರಿ, ಒಪ್ಪಿತ ಭಾವನೆಗಳನ್ನು ಲಿಖಿತ ಸಂಖ್ಯೆಗಳ ಮೂಲಕ ನಿರ್ದೇಶಿಸುವ ಲೇಖನ ಚಿಹ್ನೆಗಳನ್ನು ಶಬ್ದಗಳ ಮುಂದೆ ವಾಕ್ಯದಲ್ಲಿ ಅಥವಾ ಕೊನೆಯಲ್ಲಿ ಬಳಸಲಾಗುತ್ತದೆ.

1.ಪೂರ್ಣವಿರಾಮ ಚಿಹ್ನೆ : (.)ಇದು ಪೂರ್ಣವಿರಾಮ ಚಿಹ್ನೆಯಾಗಿದೆ ವಾಕ್ಯದಲ್ಲಿ ಕ್ರಿಯೆಯು ಪೂರ್ಣ ಗೊಂಡಿರುವುದನ್ನು ಸೂಚಿಸುವ ಕ್ರಿಯಾಪದದ ಮುಂದೆ ಪೂರ್ಣವಿರಾಮ ಚಿಹ್ನೆಯನ್ನು ಬಳಸಲಾಗುತ್ತದೆ.ಪೂರ್ಣ ವಿರಾಮ ಚಿಹ್ನೆಯು ವಾಕ್ಯದ ಕೊನೆಯಲ್ಲಿ ಬರುತ್ತದೆ.

ಉದಾ:ವಿದ್ಯಾರ್ಥಿಗಳು ಅಭ್ಯಾಸವನ್ನು ಮಾಡುತ್ತಾರೆ.

2.ಅಲ್ಪವಿರಾಮ ಚಿಹ್ನೆ : (,)ಇದು ಅಲ್ಪವಿರಾಮ ಚಿಹ್ನೆಯಾಗಿದೆ.ಸಂಬೋಧನೆ ಶಬ್ದ, ಒಂದಕ್ಕಿಂತ ಹೆಚ್ಚು, ನಾಮಪದ, ವಿಶೇಷಣ, ಸರ್ವನಾಮ, ತದ್ದಿತಾಂತ, ಇಂತಹ ಪದಗಳ ಮುಂದೆ ಅಲ್ಪವಿರಾಮ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ:ಬಟ್ಟೆ, ಗಿರಣಿ, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ, ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಯಿತು.

3.ಪ್ರಶ್ನಾರ್ಥಕ ಚಿಹ್ನೆ : (?)ಇದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಪ್ರಶ್ನೆ ರೂಪದ ಪದ್ಯ&ವಾಕ್ಯಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಲಾಗುತ್ತದೆ. ಯಾರು? ಎಲ್ಲಿ? ಯಾವಾಗ? ಮುಂತಾದ ಶಬ್ದಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ:ರಾಜನಾದವನು ಕರ್ತವ್ಯವೇನು?

4.ಅರ್ಧ ವಿರಾಮ ಚಿಹ್ನೆ : ( ; )ಇದು ಅರ್ಧವಿರಾಮ ಚಿಹ್ನೆಯಾಗಿದೆ.ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪ ವಾಕ್ಯಗಳ ಕೊನೆಗೆ ಅರ್ಧವಿರಾಮ ಚಿಹ್ನೆಯನ್ನು ಬಳಸಲಾಗುತ್ತದೆ.
                  ಒಂದು ಪ್ರಧಾನ ವಾಕ್ಯ ದಡಿಯಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸ್ವತಂತ್ರ ವಾಕ್ಯಗಳು ಬಂದಾಗ ಆ ಸ್ವತಂತ್ರ ವಾಕ್ಯದ ಕ್ರಿಯಾಪದದ ಮುಂದೆ ಅರ್ಧವಿರಾಮ ಬಳಸಲಾಗುತ್ತದೆ.

ಉದಾ:ತಾವು ಕಡಿಮೆ ಮಾತನಾಡಿದ್ದೀರಿ;ಹೆಚ್ಚು ಕೆಲಸ ಮಾಡಿದ್ದೀರಿ;ಎಂದು ನೆಹರೂರವರು ವಿಶ್ವೇಶ್ವರಯ್ಯನವರಿಗೆ ಹೇಳಿದರು.

5.ಭಾವಸೂಚಕ ಚಿಹ್ನೆ : ( ! )ಇದು ಭಾವಸೂಚಕ ಚಿಹ್ನೆಯಾಗಿದೆ.ಹರ್ಷ, ಆಶ್ಚರ್ಯ, ಸಂತೋಷ,ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಭಾವಸೂಚಕ ಚಿನ್ಹೆಯನ್ನು ಬಳಸಲಾಗುತ್ತದೆ.
                     ಅಯ್ಯೋ! ಅಬ್ಬಾ! ಆಹಾ! ಅಯ್ಯಯ್ಯೋ! ಛೇ! ಭಲೇ! ಓಹೋ! ಮುಂತಾದವುಗಳು ಭಾವಸೂಚಕ ಶಬ್ದಗಳಾಗಿವೆ.

ಉದಾ:ಅಯ್ಯೋ! ಹೀಗಾಗಬಾರದಿತ್ತು.

6.ಉದ್ಧರಣ ಚಿಹ್ನೆ : (" ") ಇದು ಉದ್ಧರಣ ಚಿಹ್ನೆಯಾಗಿದೆ.ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ:ಅಲ್ಲಮಪ್ರಭುಗಳು "ಮಾತೆಂಬುದು ಜ್ಯೋತಿರ್ಲಿಂಗ" ಎಂದು ಹೇಳಿದ್ದಾರೆ.

7.ವಾಕ್ಯವೇಷ್ಟನ ಚಿಹ್ನೆ : ( ' ' )ಇದು ವಾಕ್ಯವೇಷ್ಟನ ಚಿಹ್ನೆಯಾಗಿದೆ.ಪಾರಿಭಾಷಿಕ ಪದಗಳನ್ನು ಬಳಸುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾಹರಣೆ : ⭐ದ.ರಾ.ಬೇಂದ್ರೆಯವರು 'ಗರಿ' 'ನಾದಲೀಲೆ' 'ನಾಕುತಂತಿ' 'ಸಂಗೀತ' 'ಉಯ್ಯಾಲೆ' ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
⭐ಕನ್ನಡ ಭಾಷೆಗೆ 'ಇಂಗ್ಲಿಷ್', 'ಸಂಸ್ಕೃತ', 'ಪರ್ಶಿಯನ್', 'ಪೋರ್ಚುಗೀಸ್', 'ಉರ್ದು', 'ಅರಬ್ಬಿ' ಭಾಷೆಯಿಂದ ಪದಗಳು ಬಂದಿವೆ.

8.ಆವರಣ ಚಿಹ್ನೆ : ( )ಇದು ಆವರಣ ಚಿಹ್ನೆಯಾಗಿದೆ.ಒಂದು ಪದವನ್ನು ಅಥವಾ ಒಂದು ವಾಕ್ಯವನ್ನು ಹೇಳಿ ಅದಕ್ಕೆ ಸಮನಾದ ಪದವನ್ನು ಅಥವಾ ವಾಕ್ಯವನ್ನು ಹೇಳುವಾಗ ಆವರಣ ಚಿಹ್ನೆ ಬಳಸಲಾಗುತ್ತದೆ.

⭐ಉದಾಹರಣೆಗೆ:ನೀರನ್ನು ವಿಭಜಿಸಿದರೆ ಹೈಡ್ರೋಜನ್ (ಜಲಜನಕ) ಆಕ್ಸಿಜನ್ (ಆಮ್ಲಜನಕ) ಉತ್ಪತ್ತಿಯಾಗುತ್ತದೆ.

ವಿವರಣಾತ್ಮಕ ಚಿಹ್ನೆ : ( : )ಇದು ವಿವರಣಾತ್ಮಕ ಚಿಹ್ನೆಯಾಗಿದೆ.ಒಂದು ವಿಷಯದ ವಿವರಣೆಯನ್ನು ನಾವು ನೀಡಬೇಕಾದರೆ ಈ ಚಿನ್ಹೆಯನ್ನು ಬಳಸುತ್ತೇವೆ.

⭐ಉದಾಹರಣೆ :ಅಕ್ಷರ :ಭಾಷೆಯ ಅತ್ಯಂತ ಚಿಕ್ಕ ಘಟಕಕ್ಕೆ ಅಕ್ಷರ ಎನ್ನುವರು.

   😊ಮುಕ್ತಾಯ😊

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು