ಅವರ "ಸ್ಮೃತಿ ದಿನ"
> ಜನನ :- ಮೇ 28, 1883
> ನಿಧನರಾದರು :- ಫೆಬ್ರವರಿ 26, 1966
=======================
ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ - ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ . ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ - ರಾಧಾಬಾಯಿ ದಂಪತಿಗಳಿಗೆ 1883 ರ ಮೇ 28 ರಂದು ಜನಿಸಿದ ವಿನಾಯಕ ಛಲ - ಸಾಹಸ - ಹೋರಾಟಗಳ ಪರ್ಯಾಯ , ಬದುಕು ಕ್ರಾಂತಿಕುಸುಮಗಳ ಸುಂದರಮಾಲೆ . ಹುತಾತ್ಮ ವಾಸುದೇವ ಬಲವಂತ ಫಡಕೆಯ ಪ್ರಚಂಡ ಸಾಹಸ , ಛಾಪೇಕರ್ ಸಹೋದರರ ಸಹೋದರರ ತ್ಯಾಗ ಸ್ವಾತಂತ್ರ ಯಜ್ಞದ ಸಮಿಧೆಯಾಗುವ ದೃಢಸಂಕಲ್ಪಕ್ಕೆ ನಾಂದಿಯಾಗಿ , ಬ್ರಿಟಿಷ್ ಸರಕಾರದ ಬಂಗಾಲ ವಿಭಜನೆಯ ಪ್ರಯತ್ನ ಅಭಿನವ ಮಿತ್ರಮೇಳಗಳ ಹುಟ್ಟಿಗೆ ಕಾರಣವಾಯಿತು .
===================
ಕಾಂಗ್ರೆಸ್ನ ಧರ್ಮಸಮನ್ವಯದ ಹಗಲುಗನಸು ದೇಶವಿಭಜನೆಯ ದುರಂತ ಕಥೆಗೆ ನಾಂದಿಹಾಡುತ್ತದೆಯೆಂದು ಎಚ್ಚರಿಸಿ , ಹಿಂದುಗಳು ಸೈನ್ಯಶಕ್ತಿಯ ಭಾಗವಾಗಬೇಕೆಂದು ಅಪೇಕ್ಷಿಸಿ , ಹಿಂದು ನರಮೇಧದ ವಿರುದ್ಧ ಧ್ವನಿಯೆತ್ತಿ , ತುಷ್ಟ್ರೀಕರಣ , ಓಲೈಕೆಯ ಮಾರ್ಗದ ಅನಾಹುತದ ಬಗ್ಗೆ ಭವಿಷ್ಯವಾಣಿ ನುಡಿದರು. ಗಾಂಧಿಹತ್ಯೆಯ ನೆಪದಲ್ಲಿ ಗೃಹಬಂಧನಕ್ಕೀಡಾದ ಸಾವರ್ಕರ್,
'ನನ್ನ ಜೀವಾವಧಿ ಶಿಕ್ಷೆ '
' ಮೋಪ್ಲಾ ದಂಗೆ '
' ಹಿಂದುತ್ವ ಕೃತಿಗಳ ಮೂಲಕ ಭಾರತದ ಸಾರ್ವಭೌಮತೆಗೆದುರಾದ ದುಷ್ಟಶಕ್ತಿಗಳ ವಿರುದ್ಧ ದೇಶವಾಸಿಗಳನ್ನೆಚ್ಚರಿಸಿದ ಪುಣ್ಯಾತ್ಮ. ಇಚ್ಚಾಮರಣಿಯಂತೆ 1966 ರ ಫೆಬ್ರವರಿ 26 ರಂದು ಪಂಚಭೂತಗಳಲ್ಲಿ ಲೀನರಾದ ವೀರ ಸಾವರ್ಕರರ ಅಸ್ಕಲಿತ ರಾಷ್ಟ್ರನಿಷ್ಠೆ , ಉಜ್ವಲ ಸನಾತನತೆ ನಮ್ಮ ಜೀವನಕ್ಕೆ ಬೆಳಕಾಗಲಿ.
=================
🌷ಲೇಖಕರಾಗಿ
=========
☘ ಮರಾಠಿ ಕೃತಿಗಳಲ್ಲಿ “ಕಮಲಾ”
☘ “ನನ್ನ ಜೀವಾವಧಿ ಶಿಕ್ಷೆ”
☘ “1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ( ಇದನ್ನು ಬ್ರಿಟಿಷರು ತಮಗನುಕೂಲವಾಗಿ “ಸಿಪಾಯಿ ದಂಗೆ” ಎಂದು ಕರೆದಿದ್ದರು)
☘ ಅಂಡಮಾನಿನ ಜೈಲಿನಲ್ಲಿ ಭಾರತೀಯ ಖೈದಿಗಳ ಪಾಡನ್ನು ಪ್ರತಿಬಿಂಬಿಸುವ “ಕಾಳಾ ಪಾಣಿ” (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ)
☘ ಭಾರತದ ಇತಿಹಾಸದ ಕೆಲ ಸುವರ್ಣಾವಧಿಗಳನ್ನು ಕುರಿತ “ ಬಂಗಾರದ ಆರು ಪುಟಗಳು” ಎಂಬ ಸ್ಪೂರ್ತಿದಾಯಕ ಪುಸ್ತಕವನ್ನು ಬರೆದರು.
☘ ರತ್ನಗಿರಿ ಜೈಲಿನಲ್ಲಿದ್ದಾಗ ಬರೆದ ಪುಸ್ತಕಗಳಲ್ಲೊಂದು “ಹಿಂದುತ್ವ”.
=================
🌷ಫೆ.28ಕ್ಕೆ ಕೃತಿ ಲೋಕಾರ್ಪಣೆ
=================
ಸಾವರ್ಕರ್ ಲೇಖನಿಯಿಂದ 20 ಸಾವಿರ ಪುಟಗಳಷ್ಟು ಸಾಹಿತ್ಯ ಉಕ್ಕಿ ಹರಿದಿದೆ .
ಇದೇ 28 ಕ್ಕೆ ಅವರ ಅಂತಿಮ ಕೃತಿ ಲೋಕಾರ್ಪಣೆಯಾಗುತ್ತಿದೆ .
“ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು" ಈ ಕೃತಿಯ ಕನ್ನಡ ಅವತರಣಿಕೆ . ತಮ್ಮ ಇಳಿವಯಸ್ಸಿನಲ್ಲಿ 1963 ರಲ್ಲಿ ಮರಾಠಿಯಲ್ಲಿ ರಚಿಸಿದ ಈ ಕೃತಿ ಈಗಾಗಲೇ ಹಿಂದಿ , ಆಂಗ್ಲ ಮತ್ತಿತರ ಭಾಷೆಗಳಲ್ಲಿ ಬಂದಿದೆ .
=================
ಕಾಮೆಂಟ್ ಪೋಸ್ಟ್ ಮಾಡಿ