ಮೊಘಲ್ ಸಾಮ್ರಾಜ್ಯ (1526-1857)


🔹ಮೊಘಲ್ ಸಾಮ್ರಾಜ್ಯದ ಸ್ಥಾಪಕ - *ಬಾಬರ್* 

🔸ತುರ್ಕಿ ಭಾಷೆಯಲ್ಲಿ ತುಜಕ್ - ಇ - ಬಾಬರಿ ಅಥವಾ ಬಾಬರ್‌ನಾಮ ಎಂಬ ಆತ್ಮಕಥನವನ್ನು ಬರೆದವರು - *ಬಾಬರ್* 

🔹 "ದಿನ್‌ಪನಾ" ಎಂಬ ಹೊಸನಗರವನ್ನು ನಿರ್ಮಿಸಿದವರು *ಹುಮಾಯೂನ್* 

🔸ಸಿಂಧನಿಂದ ಸೋನಾರ್‌ಗಾಂವ್‌ವರೆಗಿನ "ಗ್ರಾಂಡ್‌ಟ್ರಂಕ್" ರಸ್ತೆಯನ್ನು ನಿರ್ಮಿಸಿದವನು -
*ಷೇರ್ ಷಾ ಸೂರಿ* 

🔹 ' "ಜಗತ್ತು ಒಂದು ಸೇತುವೆ ಅದನ್ನು ದಾಟು" ' ಈ ವಾಕ್ಯವನ್ನು ಈ ಕಟ್ಟಡದ ಮೇಲೆ ಕೆತ್ತಲಾಗಿದೆ-
 *ಬುಲಂದ್ ದರ್ವಾಜ್* 

 🔸ಕಂದಾಯದ ವಿವರ ಮತ್ತು ರೈತರ ಹಕ್ಕುಗಳನ್ನು ಸಂರಕ್ಷಿಸುವ ಪಟ್ಟಾ ಎಂಬ ವ್ಯವಸ್ಥೆಯನ್ನು ಷೇರ್‌ನ ನ ಆಡಳಿತದಲ್ಲಿ ರೂಪಿಸಿದವರು
 *ರಾಜಾ ತೋಡರಮಲ್ಲ* 

🔹 2 ನೇ ಪಾಣಿಪತ್ ಕದನ ನಡೆದ ವರ್ಷ- *ಕ್ರಿಶ 1556* 

🔸 ಮಹಾಭಾರತವನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದ ಕವಿ
 *ಅಬುಲ್ ಫೈಜಿ* 

 🔹ಅಕ್ಬರ್ ರನ ಆಸ್ಥಾನದಲ್ಲಿದ್ದ ಹಿಂದೂಸ್ಥಾನಿ ಸಂಗೀತದ ಪಿತಾಮಹ *ತಾನಸೇನ* 

 🔸 ಅಕ್ಷರನ ಆಸ್ಥಾನದಲ್ಲಿದ್ದ ಪ್ರಮುಖ ಮುಸ್ಲಿಂ ವರ್ಣ ಚಿತ್ರಕಾರ
 *ಸೈಯದ್ ಅಲಿ* ಹಾಗೂ *ಅಬ್ದುಸ್ಸಮದ* 

🔹 ದೆಹಲಿಯ ಕೆಂಪುಕೋಟೆ , ಜುಮ್ಮಾ ಮಶೀದಿ ಹಾಗೂ ಆಗ್ರಾದಲ್ಲಿ ತಾಜಮಹಲನ್ನು ಕಟ್ಟಿಸಿದವರು-
 *ಷಹಜಹಾನ್* 

🔸  ಷಹಜಹಾನನ ಕಾಲದ ಖ್ಯಾತ ಕಲಾಕೃತಿ -
*ಮಯೂರ ಸಿಂಹಾಸನ* 

🔹 ರಾಜಾ ಮಾನಸಿಂಗ್ , ರಾಜಾ ತೊಡರಮಲ್ಲ . ಹಾಗೂ ಭಗವಾನ್‌ದಾಸ್ ಇವರು ಮೊಘಲರ ಕಾಲದ-
 *ಹಿಂದೂ ಮನ್ಸಬ್ದಾರರು* 

🔸 ಮನ್ಸಬ್ ಎಂದರೆ - *ಶ್ರೇಣಿ* ಅಥವಾ *ದರ್ಜೆ* ಎಂದರ್ಥ

🔹ಫತ್ವಾ - ಇ - ಆಲಂಗೀರ್ ಎಂಬ ನ್ಯಾಯ ಸಂಹಿತೆಯನ್ನು ಪರಿಚಯಿಸಿದ ಮೊಘಲ ದೊರೆ - *ಔರಂಗಜೇಬ್* 

 🔹ಮೊಘಲರ ಆಳ್ವಿಕೆಯಲ್ಲಿ ಪ್ರತಿವರ್ಷ ಸಾಗುವಳಿಗೆ ಒಳಪಡುತ್ತಿದ್ದ ಭೂಮಿಯನ್ನು ಹೀಗೆ ಕರೆಯುತ್ತಿದ್ದರು- *ಪೋಲಾಜ್* 

🔸 ಮೊಘಲರು ವಾಸ್ತುಶಿಲ್ಪ ಕಲೆಗಳಲ್ಲಿ ಬಳಸಿಕೊಂಡ ಕಲಾಶೈಲಿ
 *ಇಂಡೋ - ಇಸ್ಲಾಮಿಕ್* 

🔹 ಶಿಲೆಯಲ್ಲಿನ ಭಾವಗೀತೆ , ಸೌಂದರ್ಯದ ನಿಧಿ , ವಾಸ್ತುಶಿಲ್ಪದ ರಾಣಿ ಎಂದು ಕರೆಯಲಾಗುವ ಮೊಘಲರ ವಾಸ್ತುಶಿಲ್ಪ- *ತಾಜ್‌ಮಹಲ್* 

 🔸 ತಾಜ್‌ಮಹಲ್ ವಾಸ್ತುಶಿಲ್ಪದ ಶಿಲ್ಪಿ - *ಉಸ್ತಾದ್ ಇಸಾ* 
💠💠💠💠💠💠💠💠💠💠💠💠
*===================

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು