ಎಸ್.ಎಲ್. ಭೈರಪ್ಪ, ಚಂದ್ರಶೇಖರ್ ಪಾಟೀಲ್, ಪಿ ಲಂಕೇಶ್

 ✍ ಎಸ್.ಎಲ್. ಭೈರಪ್ಪ


🔹 ಜನನ: 26-ಜುಲೈ -1934


🔸 ಸ್ಥಳ  : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ


🔹 ತಂದೆ-ತಾಯಿ:  ಲಿಂಗಣ್ಣಯ್ಯ,  ಗೌರಮ್ಮ


🔸 ವೃತ್ತಿ: ಬರಹಗಾರ, ಕಾದಂಬರಿಕಾರ, ಪ್ರಾಧ್ಯಾಪಕ


        📝 ಸಾಹಿತಿಕ ಜೀವನ📝


🖌 ಆತ್ಮಕಥೆ : ಭಿತ್ತಿ


📌 ಕಾದಂಬರಿಗಳು : ಧರ್ಮಶ್ರೀ,  ದೂರಸರಿದವರು, ಮತದಾನ, ಜಲಪಾತ,  ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ,  ಗರ್ಭಭಂಗ,  ಗ್ರಹಣ, ಅನ್ವೇಷಣೆ,  ಪರ್ವ, ನೆಲೆ, ವಂಶವೃಕ್ಷ, ನಿರಾಕರಣ, ತಂತು, ಸಾರ್ಥ, ಗಜಜನ್ಮ,  ಬೆಳಕು ಮೂಡಿತು,  ಯಾನ, ಆವರಣ,  ಅಂಚು, ಮಂದ್ರ.


🖍 ಅನುವಾದ:  ನಮ್ಮ ಪರಂಪರೆಯ ಕಥೆಗಳು


📍 ಸಾಹಿತ್ಯವಿಮರ್ಶೆ: ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ, ಕಥೆ ಮತ್ತು ಕಥಾವಸ್ತು.


✏️ ಇಂಗ್ಲೀಷ್ ಕಾದಂಬರಿ: truth and beauty 


🎥 ಚಲನಚಿತ್ರಗಳು : ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ, ವಂಶ ವೃಕ್ಷ.


            🏆 ಪ್ರಶಸ್ತಿಗಳು🏆


🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1966 (ವಂಶವೃಕ್ಷ)


🏅 ರಾಜ್ಯ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ--1975 (ದಾಟು)


🎖 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1987 (ಸಾಕ್ಷಿ)


🏅 ಮಾಸ್ತಿ ಪ್ರಶಸ್ತಿ


🎖 ಕಲ್ಕತ್ತೆಯ ಭಾರತೀಯ ಭಾಷಾ ಪ್ರಶಸ್ತಿ


🏅 ಸರಸ್ವತಿ ಸಮ್ಮಾನ್ ಪ್ರಶಸ್ತಿ--2010 (ಮಂದ್ರ)


🎖 ನಾಡೋಜ ಪ್ರಶಸ್ತಿ--2011


´´ ವಿಶೇಷ ಅಂಶಗಳು´´´


🎯 2002ರಲ್ಲಿ ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 


🎯 ಇವರ ಬರವಣಿಗೆಯಲ್ಲಿ ಮಧ್ಯಮ ವರ್ಗದ ಓದುಗರನ್ನು ಆಕರ್ಷಿಸುವ ಗುಣವಿದ್ದು,  ಮೇಲ್ಮಧ್ಯಮ ವರ್ಗದ ನಿರಾಶೆ, ನೋವು, ಕುಟುಂಬ ಕಲಹ, ಸಂಘರ್ಷ ವಿಘಟನೆಯ ಸುಖಾಂತ್ಯ ವೈವಿಧ್ಯ ವಸ್ತುಗಳಿರುತ್ತವೆ.


ಚಂದ್ರಶೇಖರ್ ಪಾಟೀಲ್✍

           ☀️ ಚಂಪಾ☀️


❄️ ಜನನ:  18 ಜೂನ್ 1936


❄️ ಸ್ಥಳ :ಧಾರವಾಡ ಜಿಲ್ಲೆಯ ಹತ್ತಿಮತ್ತೂರು


❄️ ಕಾವ್ಯನಾಮ: ಚಂಪಾ


❄️ ವೃತ್ತಿ: ಬರಹಗಾರ, ಸಾರ್ವಜನಿಕ ಬುದ್ಧಿಜೀವಿ, ಪ್ರಾಧ್ಯಾಪಕ


         📝 ಸಾಹಿತಿಕ ಜೀವನ📝


🖍 ಕವನಸಂಕಲನಗಳು ಬಾನುಲಿ, ಮಧ್ಯಬಿಂದು ಶಾಲ್ಮಲಾ ನನ್ನ ಶಾಲ್ಮಲಾ, ಗುಂಡಮ್ಮನ ಹಾಡು,  ಅರ್ಧ ಸತ್ಯದ ಹುಡುಗಿ,  ಹೂವುಹಣ್ಣು ತಾರೆ, 

 ಓ ನನ್ನ ದೇಶ ಬಾಂಧವರೇ, ಗಾಂಧಿ ಸ್ಮರಣೆ, 19 ಕವನಗಳು. 


🖌 ನಾಟಕಗಳು : ಅಪ್ಪ, ಗೋಕರ್ಣದ ಗೌಡಸಾನಿ, ಟಿಂಗರಬುಡ್ಡಣ್ಣ, ಕುಂಟಾ ಕುಂಟಾ  ಕುರವತ್ತಿ,  ಕೊಡೆಗಳು, ಜಗದಂಬೆ, ಬುರುಡಿ ಬಾಬಾನ ಲಕ್ಷಾಪಹರಣ, ನಳ ಕವಿಯ ಮಸ್ತಕಾಭಿಷೇಕ. 


✒️ವಿಮರ್ಶೆ ಮತ್ತು ಪ್ರಬಂಧ: ತಿದ್ದುನನ್ನಾ ಹಡಿನಾ ಹಲ್ಲಾ, ಅನಾರೋಗ್ಯ ಭಾಗ್ಯ, ಚಂಪಡಕಿಯಾ, ನಾನು ಕಂಡಂತೇ ನಾನಗೆ ಕಂಡಷ್ಟು, ಅಕ್ಷರಲೋಕ ಆಕೃತಿಗಳು, ಚಂಪಾ ನೋಟಾ, ಚಂಪಾ ಅಂಕಣ, ನನ್ನ ಗುರು ಗೋಕಾಕ, ಕೃತಿ ಕೇಂದ್ರ, ನಿತ್ಯ ವರ್ತಮಾನ, ಕನ್ನಡ ಕನ್ನಡ ಬಾರ್ರಿ ನಮ್ಮ ಸಂಗಡ. 


🖌 ಇತರೆ ಕೃತಿಗಳು: ಸಂಕ್ರಮಣ ಕಾವ್ಯ, ಇತರದೊಂದಿಗೆ, ಸಾಹಿತ್ಯ ಸೃಷ್ಟಿ ಸಾಹಿತ್ಯ ಸೃಷ್ಟಿ,  ಬಂಡಾಯ ಮತ್ತು ಸಾಹಿತ್ಯ, ಪ್ರಗತಿಶೀಲ ದಲಿತ ಬಂಡಾಯ, ನೆಲ್ಸನ್ ಮಂಡೇಲಾ, ಗಾಂಧಿ ಗಾಂಧಿ ಗಾಂಧಿ, ಜೂನ್ 75, ಮಾರ್ಚ್ 77, 26 ದಿನ 25 ರಾತ್ರಿ, ಸಂಕ್ರಮಣ ಕಾವ್ಯ ಸಂಚಯ. 


               🏅 ಪ್ರಶಸ್ತಿಗಳು🏅


🏵 ಪಂಪ ಪ್ರಶಸ್ತಿ ---2009


🏵 ಆಳ್ವಾಸ್ ನುಡಿಸಿರಿ ಪ್ರಶಸ್ತಿ-- 2011


💮💮 ವಿಶೇಷ ಅಂಶಗಳು💮💮


🔆 2017ರ ಮೈಸೂರಿನಲ್ಲಿ ಜರುಗಿದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 


🔆 ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.


🔆ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. 


🔆 ಪ್ರಸ್ತುತ : ಸಂಕ್ರಮಣ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪಿ ಲಂಕೇಶ್

              

🧿 ಜನನ : 8 ಮಾರ್ಚ್ 1935


🧿 ಸ್ಥಳ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ


🧿 ವೃತ್ತಿ: ಬರಹಗಾರ, ಸಂಪಾದಕ, ಚಲನಚಿತ್ರ ನಿರ್ಮಾಪಕ, ಕವಿ, ನಾಟಕಕಾರ, ಶಿಕ್ಷಕ


🧿ನಿಧನ : 25 ಜನವರಿ 2000 


          📝 ಸಾತಿಕ ಜೀವನ📝


📌 ಆತ್ಮಕಥೆ : ಹುಳಿಮಾವಿನ ಮರ


📌 ಕಥಾಸಂಕಲನಗಳು : ಕೆರೆಯ ನೀರು ಕೆರೆಗೆ ಚೆಲ್ಲಿ, ಕಲ್ಲು ಕರಗುವ ಸಮಯ, ಉಲ್ಲಂಘನೆ,  ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ,  ನಾನಲ್ಲ .


📌 ಕವನಗಳು: ಬಿಚ್ಚು ಹಾಗೂ ತಲೆಮಾರು


📌 ವಿಮರ್ಶೆಗಳು : ಪ್ರಸ್ತುತ,  ಕಂಡದ್ದು ಕಂಡ ಹಾಗೆ


📌 ಸಂಪಾದನೆ : ಅಕ್ಷರ ಹೊಸ ಕಾವ್ಯ, ಲಂಕೇಶ್ ಪತ್ರಿಕೆ, ಟೀಕೆ-ಟಿಪ್ಪಣಿ. 


📌 ಅನುವಾದಗಳು :ಪಾಪದ ಹೂಗಳು, ದೊರೆ ಈಡಿಪಸ್. 


📌 ಕಾದಂಬರಿಗಳು : ಮುಸ್ಸಂಜೆಯ ಕಥಾ ಪ್ರಸಂಗ, ಬಿರುಕು, ಅಕ್ಕ. 


📌 ನಾಟಕಗಳು: ಸಂಕ್ರಾಂತಿ, ಟಿ ಪ್ರಸನ್ನನ ಗೃಹಸ್ಥಾಶ್ರಮ, ಗಿಳಿಯು ಪಂಜರದೊಳಿಲ್ಲ,  ಪೋಲೀಸರಿದ್ದಾರೆ ಎಚ್ಚರಿಕೆ, ಕ್ರಾಂತಿ ಬಂತು ಕ್ರಾಂತಿ, ಗುಣಮುಖ, ಸಿದ್ಧತೆ, ನನ್ನ ತಂಗಿಗೊಂದು ಗಂಡು ಕೊಡಿ, ತೆರೆಗಳು.


📌ಚಲನಚಿತ್ರಗಳು: ಪಲ್ಲವಿ, ಅನುರೂಪ, ಎಲ್ಲಿಂದಲೋ ಬಂದವರು, ಖಂಡವಿದೆಕೋ ಮಾಂಸವಿದೆಕೋ. 


           🏆 ಪ್ರಶಸ್ತಿಗಳು🏆


🏅ರಾಷ್ಟ್ರೀಯ ಪ್ರಶಸ್ತಿ --1976 (ಪಲ್ಲವಿಗೆ ಅತ್ಯುತ್ತಮ ನಿರ್ದೇಶನಕ್ಕಾಗಿ)


🏅ಸಾಹಿತ್ಯ ಅಕಾಡೆಮಿ ಪ್ರಶಸ್ತಿ -- 1993

(ಕಲ್ಲು ಕರಗುವಾ ಸಮಯ ಮತ್ತು ಇತರೆ  ಕಥೆಗಳಿಗಾಗಿ)


🎖ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ --1986


🏅ಬಿ.ಎಚ್.ಶ್ರೀಧರ ಪ್ರಶಸ್ತಿ


🎖ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ


🎖ಆರ್ಯಭಟ ಸಾಹಿತ್ಯ ಪ್ರಶಸ್ತಿ


❄️❄️ ವಿಶೇಷ ಅಂಶಗಳು❄️❄️


☀️ ನವ್ಯ ಸಾಹಿತ್ಯದ ಪ್ರಮುಖ ಕಥೆಗಾರರಾಗಿ, ಕಾದಂಬರಿಕಾರರಾಗಿ ಮತ್ತು ವಿಮರ್ಶಕರಾಗಿ ಚಲನಚಿತ್ರದ ನಿರ್ದೇಶಕರಾಗಿ, ಸಂಪಾದಕರಾಗಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು