ಇಂದಿನ ಕರ್ನಾಟಕದ ಏಕೀಕರಣದ ಪೂರ್ವದಲ್ಲಿ ವಿವಿಧ ರಾಜಕೀಯ ಅಧಿಕಾರಶಾಹಿಗಳಲ್ಲಿ ಹಂಚಿ ಹೋಗಿತ್ತು. 18ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರು ರಾಜಕೀಯ ಅಧಿಪತ್ಯವನ್ನು ಸಾಧಿಸುವ ಜೊತೆಜೊತೆಯಲ್ಲಿ ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜನರನ್ನು ತಮ್ಮ ಹಿತಾಸಕ್ತಿಗಳಿಗಾಗಿ ಶೋಷಿಸಲು ತೊಡಗಿದರು. ಈ ಶೋಷಣೆಗಳು ಕರ್ನಾಟಕವೂ ಸೇರಿದಂತೆ ವಿವಿಧ ಭಾಗಗಳಲ್ಲಿ ಅಸ್ಥಿರತೆಯನ್ನು ಸೃಷ್ಟಿಸಿದವು. ದೇಶೀ ರಾಜರು ರಾಜಕೀಯ ಅಸ್ಮಿರತೆಯನ್ನು ಅನುಭವಿಸತೊಡಗಿದರು. ಇದರಿಂದ ಕರ್ನಾಟಕದ ಬಹುತೇಕ ವಟಿಷರ ವಿರುದ್ಧ ಭಾಗಗಳು ಬಿಜ ಕೇಳಲು ಆರಂಭಿಸಿದವು. ಹೀಗಾಗಿ ಆರಂಭದಲ್ಲಿ ಜಮೀನ್ದಾರರು, ಸಂಸ್ಥಾನದ ರಾಜರು ಮುಂತಾದವರು ತಮ್ಮಲ್ಲಿಯ ಯಾವುದೇ ಬೆಳೆಯನ್ನು ಸಾಧಿಸಲು ಪ್ರಯತ್ನಿಸದ ಒಬ್ಬೊಬ್ಬರಾಗಿಯ ವಿಘಟಿತ ರೂಪದಲ್ಲಿ ಬ್ರಿಟಿಷರ ವಿರುದ್ಧ ಬಂಡೇಳುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಮೈಸೂರು ರಾಜ್ಯದ ರಾಜಕೀಯ ಸಂಕ್ರಮಣವನ್ನು ಬಳಸಿಕೊಂಡ ಹೈದರಾಲಿ ಮತ್ತು ಅವನ ಮಗ ಟೇಪ್ಪುಸುಲ್ತಾನರು ಟಿಷರ ವಿರುವ ದಕ್ಷಿಣ ಭಾರತದಲ್ಲಿ ಆರಂಭಿಕವಾದ ಬಹುದೊಡ್ಡ ಪ್ರತಿರೋಧವನ್ನು ಒಡ್ಡಿದರು. ರಾಜಕೀಯವಾಗಿ ಸೃಷ್ಟಿಯಾದ 1761 - 1799ರ ನಡುವಿನ ಕಾಲಘಟ್ಟದ ಇವರ ಪ್ರಯತ್ನ ಚರಿತ್ತೆಯಲ್ಲಿ ಒಂದು ವಿಶೇಷವಾದ ಪರ್ವ. ಇವರ ಪ್ರಯತ್ನ ಬ್ರಿಟಿಷ್ ವಿರೋಧಿ ಬಂಡಾಯದ ಆರಂಭಿಕ ಅಧ್ಯಾಯ
ಹೈದರಾಲಿ ಮತ್ತು ಟಿಪ್ಪುಸುಲ್ತಾನ
ಭಾರತದ ಚರಿತ್ರೆಯಲ್ಲಿ 18ನೇ ಶತಮಾ ಜಕೀಯ ಸಮಸ್ಯೆಗಳ ಶತಮಾನ'ವಂದೇ ಚಿತ್ರಿಸಲಟ್ಟಿದೆ. ಇದಕ್ಕೆ ಅನೇಕ ಕಾರಣಗಳವೆ. ಮೊಘಲ್ ಚಕ್ರವರ್ತಿ ಔರಂಗಜೇಬ್ನ ಮರಣ 1707ರಲ್ಲಿ ಸಂಭವಿಸಿದ್ದು ಪ್ರಮುಖ ಕಾರಣವಾಗಿದೆ. ಆತನ ಮರಣ ಮೊಘಲರ ರಾಜಕೀಯ ಸಾರ್ವಭೌಮತ್ವವನ್ನು ಕುಗ್ಗಿಸಿತು. ಇದರಿಂದಾಗಿ ದಕ್ಷಿಣ ಭಾರತದಲ್ಲಿ ಮೊಘಲರ ರಾಜಕೀಯ ಹತೋಟಿ ತಪ್ಪಿತು, ಕರ್ನಾಟಕ ಪ್ರದೇಶದಲ್ಲಿ ಅಧಿಕಾರಕ್ಕಾಗಿ ಕಿತ್ತಾಟಗಳು ಆರಂಭವಾದವು. ಇದಕ್ಕೂ ಮುನ್ನ 1704ರಲ್ಲಿ ಸಂಭವಿಸಿದ ಚಿಕ್ಕದೇವರಾಜ ಮರಣ ಮೈಸೂರು ಬೆಳವಣಿಗೆಯ ಮೇಲೆ . ಈತನ ಮರಣದಿಂದಾಗಿ ಉತ್ತರಾಧಿಕಾರಕ್ಕೆ ಸಮಸ್ಯೆ ಕಂಡುಬಂದಿದ್ದರ ಜೊತೆಗೆ ಆಡಳಿತವೂ ಕುಸಿಯಿತು, ಈ ಬೆಳವಣಿಗೆಗಳು ಆ ಕಾಲದ ಮೈಸೂರಿನ ರಾಜಕೀಯವನ್ನು ಮುಸುಕುಗೊಳಿಸಿದವು. ಈ ರೀತಿಯ ಅತಂತ್ರ ಸನ್ನಿವೇಶಗಳ ಹಿನ್ನೆಲೆಯಲ್ಲಿದ್ದ ಮೈಸೂರು ಮತ್ತು ಕರ್ನಾಟಕ ರಾಜ್ಯಗಳ ಭೂ ಪ್ರದೇಶದಲ್ಲಿ ಹೈದರಾಲಿ ರಾಜಕಿಯ ಪ್ರಮುಖ್ಯತೆಯನ್ನು ಗಳಿಸಿದನು.
ಹೈದರಾಲಿ
ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದರು. ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಆರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು. ಸೈನಿಕರನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಸಫಲನಾದನು. ಬಹುಬೇಗನೆ ನವಾಬ್ ಹೈದರಾಲಿಖಾನ್ ಎಂದೂ ಹೆಸರಾದನು. ಶಸ್ತ್ರಗಳ ಉಪಯೋಗ ಪ್ರಯೋಗಗಳಲ್ಲಿ ಖ್ಯಾತಿಗಳಿಸಿದನು. ಮಾತ್ರವಲ್ಲದೆ ಚುರುಕಿನ ಸೈನಿಕ ಕಾರ್ಯಾಚರಣಿಗಳ ಮೂಲಕ ದಳವಾಯಿಗಳ ಬಲ ಬಂದಿಸಿದನು ಮತ್ತು ಆರಸರಾಗಿದ್ದ ಎರಡನೇ ಕೃಷ್ಣರಾಜ ಒಡೆಯರವರನ್ನು ಮೂಲೆಗುಂಪಾಗಿಸಿ ಅಧಿಕಾರದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿದನು. ಮರಾಠರು, ಹೈದರಾಬಾದಿನ ನಿಜಾಮು ಮತ್ತು ಆರ್ಕಾಟಿನ ನವಾಬರು ತಮ್ಮ ರಾಜಕೀಯ ಅಸ್ತಿತ್ವ ಮತ್ತು ಮೇಲ್ಡ್ ಸಾಧನೆಗಾಗಿ ಹೋರಾಟಗಳಲ್ಲಿ ನಿರತರಾಗಿದ್ದರು, ಈ ಸಂಕ್ರಮಣದ ಸಂದರ್ಭವನ್ನು ತಮ ರಾಜಕೀಯ ಪ್ರಾಬಲ್ಯಕ್ಕಾಗಿ ಬ್ರಿಟಿಷರು ಮತ್ತು ಫ್ರೆಂಚರು ಬಳಸಿಕೊಳ್ಳತೊಡಗಿದರು. ಈ ಹಿನ್ನೆಲೆಯಲ್ಲಿ, ಹೈದರಾಲಿ ಮತ್ತು ಟಿಪ್ಪು ಅವರ ಅವಧಿಯಲ್ಲಿ ಸಂಭವಿಸಿದ ಆಂಗ್ಲ-ಮೈಸೂರು ಯುದ್ಧಗಳು ಮತ್ತು ಅದಕ್ಕೆ ಪ್ರೇರಣೆ ಓದಗಿಸಿದ ರಾಜಕೀಯ ಬೆಳವಣಿಗೆಗಳು
ಮೊದಲನೆಯ ಅಂಗೋ ಮೈಸೂರು ಯುದ್ಧ 1767ರಲ್ಲಿ ಪಾರಂಭವಾದ 1769ರಲ್ಲಿ ಅಂತ್ಯಗೊಂಡಿತು. ದಕ್ಷಿಣ ಭಾರತದಲ್ಲಿ ಹೈದರಾಲಿ ಗಳಿಸುತ್ತಿದ್ದ ರಾಜಕೀಯ ಪ್ರಾಬಲ್ಯ ಭಟಿಷರು, ಹೈದರಾಬಾದಿನ ನಿಜಾಮ ಮತ್ತು ಮರಾಠರಲ್ಲಿ ರಾಜಕೀಯ ಅಸಹನೆ ಮೂಡಿಸಿತು. ಹೀಗಾಗಿ ಬ್ರಿಟಿಷರು ತಮ್ಮ ಸಾಮ್ರಾಜ್ಯಷಾಹಿ ಧೋರಣೆಗೆ ಮುಳ್ಳಾಗಿ ಪರಿಣಮಿಸಿದ್ದ ಹೈದರಾಲಿಯನ್ನು ರಾಜಕೀಯವಾಗಿ ಹಣಿಯಲು ತಂತ್ರಗಳನ್ನು ಮಾಡಲಾರಂಭಿಸಿದರು. ಮರಾಠರ ದಾಳಿಯಿಂದ ರಾಜಕೀಯ ಮತ್ತು ಆರ್ಥಿಕ ನಷ್ಟವನ್ನು ಅನುಭವಿಸಿದ ಹೈದರಾಲಿ ಮರಾಠರು ಮತ್ತು ನಿಜಾಮನನ್ನು ತನ್ನೆಡೆಗೆ ಸೆಳೆದುಕೊಳ್ಳಲು ಯತ್ನಿಸಿದನಾದರೂ ಈ ಪ್ರಯತ್ನದಲ್ಲಿ ವಿಫಲನಾದನು.
ಹೈದರ್ ಅಲಿಯ ವಿರುದ್ಧ , ಮರಾಠರು ಮತ್ತು ನಿಜಾಮನೊಂದಿಗೆ ಒಪ್ಪಂದ ಮಾಡಿಕೊಂಡರು. ಇದರನ್ವಯ ತಿಪಕ್ಷ ಒಕ್ಕೂಟ ರಚಿಸಲ್ಪಟ್ಟಿತು. ಆದರೆ ಹೈದರಾಲಿ ತನ್ನ ಚಾಣಾಕ್ಷ ರಾಜಕೀಯ ತಂತ್ರಗಳನ್ನು ಪ್ರಯೋಗಿಸುವ ಮೂಲಕ ತನ್ನ ವಿರುದ್ಧ ರಚನೆಯಾಗಿದ್ದ ಮಿತಕೂಟವನ್ನು ಒಡೆದು ಮರಾಠರು ಮತ್ತು ನಿಜಾಮನನ್ನು ಬ್ರಿಟಿಷರ ವಿರುದ್ಧ ಎತ್ತಿಕಟ್ಟುವಲ್ಲಿ ಯಶಸ್ವಿಯಾದನು.
ಈ ನಡುವೆ ಆರ್ಕಾಟ್ನಲ್ಲಿ ರಾಜಕೀಯ ಸಮಸ್ಯೆಗಳು ಕಂಡುಬಂದವು. 1767ರಲ್ಲಿ ಹೈದರಾಲಿ ಮತ್ತು ನಿಜಾಮ, ಬ್ರಿಟಿಷರ ಆಶ್ರಿತ ದೇಶೀಯ ರಾಜ್ಯವಾಗಿದ್ದ ಆರ್ಕಾಟಿಗೆ ಮುತ್ತಿಗೆ ಹಾಕಿದರು. ಇದರಿಂದಾಗಿ ಯುದ್ಧ ಪ್ರಾರಂಭವಾಯಿತು. ತಿರುಚನಾಪಳ್ಳಿ, ತಿರುವಣ್ಣಾಮಲೈ, ಅಂಬೂರು ಮೊದಲಾದ ಸ್ಥಳಗಳಲ್ಲಿ ಕದನಗಳು ಸಂಭವಿಸಿದವು. ಈ ಸಂದರ್ಭದಲ್ಲಿ ಹೈದರಾಲಿ ಮಿಂಚಿನ ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದನು. ಬ್ರಿಟಿಷ್ ಸೈನ್ಯ ಅನೇಕ ಸ್ಥಳಗಳನ್ನು ವಶಪಡಿಸಿಕೊಂಡಿತು. ಹೈದರ್ ತಾತ್ಕಾಲಿಕ ಹಿನ್ನೆಡೆ ಅನುಭವಿಸಿದರು. ಮುಂಬಯಿಯ ಬ್ರಿಟಿಷ್ ಸೈನ್ಯ ರಂಗವನ್ನು ಅವರಿಸಿತು. ಹೈದರ್ ಈ ಯುದ್ಧವನ್ನು ತನ್ನ ಪ್ರತಿಷ್ಠೆಯ ಸಂಕೇತವೆಂದು ಭಾವಿಸಿ ಕಾರ್ಯಾಚರಣೆಯನ್ನು ಮುಂದುವರಿಸಿದನು. 1769ರ ವೇಳೆಗೆ ಆತನ A ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು ಬ್ರಿಟಿಷರಲ್ಲಿ ನಡುಕವನ್ನು ಹುಟ್ಟಿಸಿತು. ಅನಿವಾರ್ಯವಾಗಿ ಬ್ರಿಟಿಷರು ಹೈದರಾಲಿಯೊಂದಿಗೆ ಚರ್ಚೆ ಮತ್ತು ಸಂಧಾನಗಳ ಮೂಲಕ 'ಮದ್ರಾಸ್ ಒಪ್ಪಂದ ಮಾಡಿಕೊಂಡರು. ಮೊದಲನೇ ಅಂಗ್ಲೋ-ಮೈಸೂರು ಯುದ್ಧ 1769ರಲ್ಲಿ ಸಹಿ ಹಾಕಲ್ಪಟ್ಟ ಮದ್ರಾಸ್ ಒಪ್ಪಂದದೊಂದಿಗೆ ಕೊನೆಯಾಯಿತು.
ಎರಡನೆಯ ಆಂಗ್ಲೋ-ಮೈಸೂರು ಯುದ್ಧ ( 1780- 1784 ) ಮದರಾಸು ಒಪ್ಪಂದ ದಕ್ಷಿಣ ಭಾರತದಲ್ಲಿ ತಾತ್ಕಾಲಿಕವಾಗಿ ರಾಜಕೀಯ ಬೆಳವಣಿಗೆಗಳನ್ನು ತಡೆಹಿಡಿದಿತ್ತು. ಆದರೆ ಬ್ರಿಟಿಷರು ಮದ್ರಾಸ್ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲು ಯತ್ನಿಸಿದರು. ಮರಾಠರು ಮಾಧವರಾಯನ ನೇತೃತ್ವದಲ್ಲಿ ಸೈನ್ಯವನ್ನು ಮುನ್ನಡೆಸಿ ಶ್ರೀರಂಗಪಟ್ಟಣದ ಕಡೆ ನುಗ್ಗಿದಾಗ ಹೈದರ್ ಬಿಟಿಷರ ಸಹಾಯವನ್ನು ಅಪೇಕ್ಷಿಸಿದನು. ಆದರೆ ಬ್ರಿಟಿಷರು ಇದನ್ನು ತಿರಸ್ಕರಿಸಿ ಮದರಾಸು ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡರು, ಮಾಹಯ ಪಂಚರ ವಸಾಹತುವಾಗಿದ್ದು, ಹೈದರಾಲಿಯ ನಿಯಂತ್ರಣಕ್ಕೊಳಪಟ್ಟತ್ತು, ಬ್ರಿಟಿಷರು ವಾಹಯನ್ನು ವಶಪಡಿಸಿಕೊಂಡಿದ್ದು ಎರಡನೆಯ ಮೈಸೂರು ಯುದ್ಧಕ್ಕೆ ಕಾರಣವಾಯಿತು.
1781ರಲ್ಲಿ ಎರಡನೆಯ ಮೈಸೂರು ಯುದ್ಧ ಪ್ರಾರಂಭವಾಯಿತು. ಯುದ್ಧದ ಪಾರಂಭದಲ್ಲಿ ಹೈದರ್ ಮುನ್ನಡೆ ಸಾಧಿಸಿದನು. ಕರ್ನಾಟಕ ಬಾಂತ್ಯದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡನು. ಕಾಂಚೀಪುರಂ ವಶವಾಯಿತು. ಕೋರಮಂಡಲ ತೀರದವರೆವಿಗೂ ತನ್ನ ಸೈನ್ಯವನ್ನು ಮುನ್ನುಗ್ಗಿಸಿದನು. ಇದು ಮದರಾಸಿನ ಬ್ರಿಟಿಷ್ ಸೈನ್ಯಾಧಿಕಾರಿಗಳಲ್ಲಿ ನಡುಕವನ್ನು ತಂದಿತು. ಹೈದರ್ ಆರ್ಕಾಟಿಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು. ಸರ್: ಏರ್ಕೂಟ್ನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಸಗೊಂಡಿತು. ಹೈದರ್ ಈ ಅವಧಿಯಲ್ಲಿ ಎಲ್ಲೂರು ಮತ್ತು ವಾಂಡಿವಾಡ್ಗಳನ್ನು ಮುತ್ತುವುದಾಗಿ ಬೆದರಿಸಿದನು. ಹೈದರನ ಸೈನ್ಯವನ್ನು ಸರ್ ಏರ್ಕೂಟ್: ಪಾಂಡಿಚೇರಿಯವರೆವಿಗೂ ಹಿಂಬಾಲಿಸಿದನು. ಪಂಚರು ಹೈದರನಿಗೆ ಬ್ರಿಟಿಷರ ವಿರುದ್ಧ ಸಹಕರಿಸಲು ನಿರಾಕರಿಸಿದರು. ಹೈದರ್, ಇದರಿಂದಾಗಿ ಯುದ್ಧಗತಿಯನ್ನು ಬದಲಿಸಿದನು. ಹೈದರ್ ಬ್ರಿಟಿಷರ ಹತೋಟಿಯಲ್ಲಿನ ಪ್ರದೇಶಗಳಿಗೆ ಮುತ್ತಿಗೆ ಹಾಕಿ ಕೊಳ್ಳೆಹೊಡೆದು ಅಪಾರ ಸಂಪತ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದನು.
1781ರಲ್ಲಿ ಫೋರ್ಟೊ ನೋವ ಎಂಬಲ್ಲಿ ಕದನದಲ್ಲಿ ಹೈದರ್ ಪರಾಭವಗೊಂಡನು. ಇದು ಯುದ್ಧದ ಗತಿಯನ್ನು ಬದಲಾಯಿಸಿತು ಮತ್ತು ಬ್ರಿಟಿಷರಲ್ಲಿ ಧೈರ್ಯವನ್ನು ಹೆಚ್ಚಿಸಿತು. ತರುವಾಯ ಮೊಲೆಲೂರ್ ಮತ್ತು ಸೋಲಿಂಗೂಗಳ ಕದನದಲ್ಲಿಯೂ ಆರ್ಥಿಕ ಹಾನಿ ಅನುಭವಿಸಿದನು. ಈ ವೇಳೆಗೆ ಬ್ರಿಟಿಷರು ಸಾಲ್ದಾಯ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೈದರನ ಒಕ್ಕೂಟದಿಂದ ಮರಾಠರು ಹಾಗೂ ನಿಜಾಮನನ್ನು ಸೆಳೆಯುವಲ್ಲಿ ಸಫಲರಾದರು. ಯುದ್ಧದ ಮಧ್ಯದಲ್ಲಿ ಹೈದರಾಲಿ 1782ರಲ್ಲಿ ಅನಾರೋಗ್ಯದಿಂದ ಮೃತನಾದನು. ಆತನ ಮಗ ಟಿಪ್ಪು ಯುದ್ಧವನ್ನು ಮುನ್ನಡೆಸಿದನು.
ಹೈದರನ ಮರಣ ಸಂದರ್ಭದಲ್ಲಿ ಮಲಬಾರ್ ಪಾಂತ್ಯದಲ್ಲಿ ನಡೆದ ಯುದ್ಧದಲ್ಲಿ ಟಿಪ್ಪ ತೊಡಗಿದ್ದನು. ಟಿಪ್ಪುವಿನ ಅನುಪಸ್ಥಿತಿಯ ಲಾಭ ಪಡೆದ ಬ್ರಿಟಿಷರು ಬಿದನೂರು ಮತ್ತು ಮಂಗಳೂರನ್ನು ವಶಪಡಿಸಿಕೊಳ್ಳಲು ಹವಣಿಸಿದರು. ತಿರುವಾಂಕೂರು, ಕಲ್ಲಿಕೋಟೆ, ಮತ್ತು ಮಲಬಾರಿನ ಅನೇಕ ರಾಜರುಗಳನ್ನು ಟಿಪ್ಪುವಿನ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳನ್ನು ಅವರು ನಡೆಸಿದರು. ಹೀಗಾಗಿ ಟಿಪ್ಪು ಮಂಗಳೂರು ಮತ್ತು ಕರಾವಳಿ ತೀರಪ್ರದೇಶದ ಮೇಲೆ ಹತೋಟಿ ಸಾಧಿಸುವುದು ಸೂಕ್ತವೆಂದು ಯೋಚಿಸಿ ಮಂಗಳೂರಿನತ್ತ ಮುನ್ನಡೆದು ಬ್ರಿಟಿಷರ ಸೈನ್ಯವನ್ನು ಸೋಲಿಸಿದರು. ಕೊನೆಗೆ 1784ರ ‘ಮಂಗಳೂರು ಒಪ್ಪಂದ’ದ ಮೂಲಕ ಎರಡನೆಯ ಅಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.
ಟಿಪ್ಪು ಸುಲ್ತಾನ
ಬ್ರಿಟಿಷರನ್ನು ತನ್ನ ರಾಜ್ಯ ವಿಸ್ತರಣೆಯ ನೀತಿಗೆ ಅಡ್ಡಿಪಡಿಸುತ್ತಿರುವ ಶತ್ರುಗಳು ಎಂದು ಭಾವಿಸಿ ಅವರನ್ನು ಓಡಿಸುವ ಗಂಭೀರ ಪ್ರಯತ್ನಗಳನ್ನು ಮಾಡಿದನು. ತಮ್ಮ ಕುಟೀಲ ನೀತಿಯಿಂದ ಭಾರತೀಯ ರಾಜ್ಯಗಳನ್ನು ಕಬಳಿಸುತ್ತಿದ್ದ ಬ್ರಿಟಿಷರನ್ನು ಪರಮ 3 ಬೆಂಗಳು ಎಂದು ತಿಳಿದ ಅವನು ಅವರನ್ನು ಭಾರತದಿಂದ ಓಡಿಸುವುದು ತನ್ನ ಆದ್ಯ ಕರ್ತವ್ಯವೆಂದು ತಿಳಿದಿದ್ದನು. ತನ್ನ 17 ವರ್ಷಗಳ ಆಳ್ವಿಕೆಯಲ್ಲಿ ನಿರಂತರವಾಗಿ ಬ್ರಿಟಿಷರೊಂದಿಗೆ ಹೊರಾಡಿದನು. ಅವನು ಬ್ರಿಟಿಷರ ಸಾಮರ್ಥ್ಯ, ತಂತ್ರ, ಕುತಂತ್ರ ಮತ್ತು ಚಾಣಾಕ್ಷ ನೀತಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದನು. ಬ್ರಿಟಿಷರಿಗೆ ವ್ಯಾಪಾರದಲ್ಲಿ ನಷ್ಟವಾದಲ್ಲಿ ಅದು ಅವರ ರಾಜಕೀಯ ಸ್ವಾಮ್ಯವನ್ನು ಕುಂದಿಸುತ್ತದೆ ಎಂದೂ ಟಿಪ್ಪು ಸುಲ್ತಾನ ಅರಿತಿದ್ದ ಅವನು ಬ್ರಿಟಿಷರನ್ನು ವಿರೋಧಿಸುತ್ತಿದ್ದವರನ್ನು ಸಂಘಟಿಸುವ ಮತ್ತು ಅವರ ನೆರವನ್ನು ಅಪೇಕ್ಷಿಸಲು ಪ್ರಯತ್ನಿಸಿದರು. ಅವರಿಗೆ ವ್ಯಾಪಾರದಲ್ಲಿ ಲಾಭವಾಗದಂತೆ ನೋಡಿಕೊಳ್ಳುವ ಮೂಲಕ ವ್ಯಾಪಾರದ ಮೇಲೆ ಅವರು ಸಾಧಿಸಿದ್ದ ಏಕಸ್ವಾಮ್ಯವನ್ನು ಮುರಿಯುವ ಪ್ರಯತ್ನಗಳನ್ನು ನಡೆಸಿದನು. ಇವು ಬ್ರಿಟಿಷರಲ್ಲಿ ಟಾವಿನ ವಿರುದ್ಧ ಮತ್ತಷ್ಟು ದ್ವೇಷ ಭಾವನೆಗಳನ್ನು ಮೂಡಿಸಿದವು.
ನಿಮಗಿದು ತಿಳಿದಿರಲಿ
8ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯ ಒತ್ತಯನ್ನು ತಡೆ ಮಾಡಿದ ಪ್ರಯತ್ನಗಳಿಂದ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ವಿಭಿನ್ನವಾಗಿ ಕಾಣುತ್ತಾರೆ. ಅವರಿಗೆ ಐರೋಪ್ಯರನ್ನು ಸಾಂಪ್ರದಾಯಿಕ ರಸಾಸಗಳಿಂದ ಮಣಿಸಲಾಗುತ್ತದೆಂಬ ಅರಿವಿತ್ತು. ಫ್ರೆಂಚರ ಸಹಾಯದಿಂದ ಹೈದರಾಲಿ ಸೈನ್ಯವನ್ನು ಆಧುನೀಕರಿಸಲು ಯತ್ನಿಸಿದ್ದ ಐರೋಪ್ಯ ಸೈನ್ಯದಂತೆ ಶಿಸ್ತಾಗಿ ಕವಾಯತು ಮಾಡುವ ಮತ್ತು ಬಂದೂಕನ್ನು ಬಳಸುವ ಪಡೆಗಳು ಮೈಸೂರಿನ ಸೈನ್ಯದಲ್ಲಿದ್ದವು. ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಭಾರತದಲ್ಲಿ ಮೊದಲಬಾರಿಗೆ ಯುದ್ಧದಲ್ಲಿ ರಾಕೆಟ್ನ್ನು ಬಳಸಿದರು. ಸೈನ್ಯದ ಆಧುನೀಕರಣದ ಜೊತೆಗೆ ತುಂಬಿದ ರಾಜ್ಯದ ಬೊಕ್ಕು ಕೂಡ ಬ್ರಿಟಿಷರ ಆಕ್ರಮಣದ ತಡೆಗೆ ಅಗತ್ಯವೆನ್ನುವುದನ್ನು ಹೈದರಾಲಿ ಮತ್ತು ಟಿಲ್ಲ ಮನಗಂಡಿದ್ದರು. ಹೈದರಾಲಿಯ ಕಣ್ಣೆದುರಿಗೆ ಕರ್ನಾಟಕ ಪ್ರದೇಶದಲ್ಲಿದ್ದ ನವಾಬರು ದಿವಾಳಿಗಳಾಗಿದ್ದರು. ಆದುದರಿಂದ ಹೈದರಾಲಿ ಮತ್ತು ಟಿಪ್ಪು ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸಲು ಅನೇಕ ನೀತಿ-ನಿಯಮಗಳನ್ನು ರೂಪಿಸಿದ್ದರು. ಶ್ರೀಗಂಧ ಮತ್ತು ತಂಬಾಕು ಮತ್ತಿತರ ಪದಾರ್ಥಗಳನ್ನು ರಾಜ್ಯದ ಏಕಸ್ವಾಮ್ಯದಡಿಗೆ ತಂದಿದ್ದರು, ಫ್ರೆಂಚ್ ತಂತರನ್ನು ಕರೆಯಿಸಿ, ಮೈಸೂರಿನ ಸಾಂಪ್ರದಾಯಿಕ ಕರಕುಶಲ ವಸ್ತುಗಳ ಗುಣಮಟ್ಟವನ್ನು ಹೆಚ್ಚಿ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ವೃದ್ಧಿಸುವ ಯೋಜನೆಯಲ್ಲಿದ್ದರು.
ಮೂರನೆಯ ಆಂಗ್ಲೋ-ಮೈಸೂರು ಯುದ್ಧ: ಈ ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ, ಆ ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು ಆತನು ಡಚ್ಚರಿಂದ ಆಯಕೋಟಾ ಮತ್ತು ಕಾರಿಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು. ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.
ಬ್ರಿಟೀಷರು ಜನರಲ್ ಮೇಡೊಸನ್ ನಾಯಕತ್ವದಲ್ಲಿ ಕಾರವಾರ, ಕೊಯಮತ್ತೂರು ತಿಂಡಿಗಳ ಮೊದಲಾದವುಗಳನ್ನು ವಶಪಡಿಸಿಕೊಂಡರು. ಇದಕ್ಕೆ ವಿರುದ್ಧವಾಗಿ ಟಿಪ್ಪು ಬಾರಾಮಹಲ್ ಪ್ರಾಂತ್ಯವನ್ನು ಮುತ್ತಿ ಸತ್ಯಮಂಗಲವನ್ನು ವಶಪಡಿಸಿಕೊಂಡನು. ತಿರುಚನಾಪಳ್ಳಿಯನ್ನು ಮುತ್ತಿ ಅದನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಆತನು ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದನಾದರೂ ಅದು ಫಲ ನೀಡಲಿಲ್ಲ. ಈ ಸಮಯದಲ್ಲಿ ಲಾರ್ಡ್ ಕಾರ್ನ್ ವಾಲೀಸ್ ಬ್ರಿಟಿಷ್ ಸೈನ್ಯದ ನಾಯಕತ್ವವನ್ನು ವಹಿಸಿಕೊಂಡನು. ಇದು ಯುದ್ಧದ ಗತಿಯನ್ನು ಬದಲಾಯಿಸಿತು.
ಬ್ರಿಟಿಷ್ ಸೈನ್ಯ ಕಾರ್ನ್ವಾಲೀಸನ ನೇತೃತ್ವದಲ್ಲಿ ಕೋಲಾರ ಮತ್ತು ಹೊಸಕೋಟೆಗಳನ್ನು ವಶಪಡಿಸಿಕೊಂಡು ಬೆಂಗಳೂರಿನತ್ತ ಮುನ್ನುಗ್ಗಿತು. ಬೆಂಗಳೂರನ್ನು ವಶಪಡಿಸಿಕೊಂಡು ಕೋಟೆಯನ್ನು ಹಾಳುಗೆಡವಿತು. ಬೆಂಗಳೂರನ್ನು ವಶಪಡಿಸಿಕೊಂಡ ಕಾರ್ನ್ವಾಲೀಸ್ ಟಿಪ್ಪುವಿನ ನಿರ್ನಾಮಕ್ಕಾಗಿ ನಿಜಾಮ ಮತ್ತು ಮರಾಠರ ನೆರವನ್ನು ಕೊಂದನು. ನಿಜಾಮ ಮತ್ತು ಮರಾಠರ ಸಂಘಟಿತ ಸೈನ್ಯ ಬ್ರಿಟಿಷರೊಂದಿಗೆ ಸೇರುವುದರೊಂದಿಗೆ ಯುದ್ಧ ತಿರುವನ್ನು ಪಡೆದುಕೊಂಡಿತು. ಮರಾರು ಸವಣೂರು, ಗಜೇಂದ್ರಗಡ, ಲಕ್ಷೇಶ್ವರ, ಹುಬ್ಬಳ್ಳಿ ಮೊದಲಾದವುಗಳನ್ನು ವಶಪಡಿಸಿಕೊಂಡರು.
1792ರಲ್ಲಿ ಸಂಘಟಿತ ಸೈನ್ಯ ಒಂದೊಂದಾಗಿ ಕೋಟೆಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣದ ಕಡೆ ಸಾಗಿತು. ರಾತ್ರಿ ವೇಳೆಯಲ್ಲಿ ಕೋಟೆಯನ್ನು ಹಾಳುಗೆಡವಲಾಯಿತು. ಇದರಿಂದ ವಿಚಿತಗೊಂಡ ಟಿಪ್ಪು ಪ್ರತಿಕರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ನಿರ್ಧರಿಸಿದನು. ಇದು ಆತನಿಗೆ ಅನಿವಾರ್ಯವೂ ಆಗಿತ್ತು 1792ರಲ್ಲಿ ಅಸಮಾನ ಪರತ್ತುಗಳನ್ನು ಹೊಂದಿದ್ದ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಟಿಪ್ಪು ಸಹಿಹಾಕುವ ಮೂಲಕ ಯುದ್ಧಕ್ಕೆ ತೆರೆಯಾಯಿತು. ಈ ಒಪ್ಪಂದದನ್ವಯ ಮೂರನೆ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.
ಟಿಪ್ಪುವನ್ನು ಮಣಿಸಲು ಬ್ರಿಟಿಷರು ಶ್ರೀರಂಗಪಟ್ಟಣ ಒಪ್ಪಂದದಲ್ಲಿ ಆಸಮಾನ ಷರತ್ತುಗಳು ಇರುವಂತೆ ನೋಡಿಕೊಂಡರು. ಆ ಷರತ್ತಾಗಳು ಯಾವುವೆಂದರೆ, ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು, ಮೂರು ಕೋಟಿ ರೂಪಾಯಿಗಳನ್ನು ಯುದ್ಧನವ ಭರ್ತಿಯಾಗಿ ಕೊಡುವುದು, ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು, ಮತ್ತು ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು. ಇದರನ್ವಯ ಶ್ರೀರಂಗಪಟ್ಟಣದಿಂದ ಬ್ರಿಟಿಷರ ನೇತೃತ್ವದಲ್ಲಿನ ಸಂಘಟಿತ ಸೈನ್ಯ ಹಿಂತೆಗೆಯಿತು.
ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧ : ಟಿಪ್ಪ ಮೂರನೆಯ ಆಂಗ್ಲೋ ಮೈಸೂರು ಯುದ್ಧದಲ್ಲಿನ ಸೋಲನ್ನು ವೈಯಕ್ತಿಕವಾಗಿ ಸ್ವೀಕರಿಸಿ ಅದನ್ನು ಒಂದು ಪ್ರಮುಖ ಸವಾಲೆಂದೇ ಪರಿಗಣಿಸಿದನು. ಒಪ್ಪಂದದನ್ವಯ ಬಿಟಷರ ನೇತೃತ್ವದಲ್ಲಿನ ಮಿತ್ತಕೂಟಕ್ಕೆ ನೀಡಬೇಕಾದ ಭೂಪ್ರದೇಶಗಳು ಮತ್ತು ಹಣವನ್ನು ಚಾಚೂ ತಪ್ಪದೆ ಸಲ್ಲಿಸಿ ಒತ್ತೆಯಾಳಾಗಿ ಕಳುಹಿಸಿಕೊಟ್ಟಿದ್ದ ತನ್ನ ಇಬ್ಬರು ಮಕ್ಕಳನ್ನು ಹಿಂದಕ್ಕೆ ಕರೆಯಿಸಿಕೊಂಡನು ಟಿಪ್ಪು ಬ್ರಿಟಿಷರ ಅಧೀನದಲ್ಲಿದ್ದ ಮಲೆಯಾಳಂ ಮಾತನಾಡುವ ಭೂಪ್ರದೇಶಗಳು ನ್ಯಾಯಯುತವಾಗಿ ತನಗೇ ಸೇರಬೇಕೆಂದು ವಾದಿಸಿದನು. ಆದರೆ ಬ್ರಿಟಿಷರು ಅದನ್ನು ಪುಷ್ಟಿಕರಿಸಲಿಲ್ಲ.
ಲಾರ್ಡ್ ವೆಲ್ಲೆಸ್ಲಿ 1798ರಲ್ಲಿ ಭಾರತದ ಗವರ್ನರ್ ಜನರಲ್ನಾಗಿ ನೇಮಕಗೊಂಡನು, ಟಿಪ್ಪುವಿನ ವಿರೋಧಿ ರಾಜಕೀಯ ಚಟುವಟಿಕೆಗಳು ಈತನ ಆವಧಿಯಲ್ಲಿ ಚುರುಕುಗೊಂಡು, ಟಿಪ್ಪ ಭಾರತೀಯ ರಾಜರ ಒಕ್ಕೂಟವನ್ನು ತನ್ನಡೆಗೆ ಸೆಳೆಯಲು ಮಾಡುತ್ತಿದ್ದ ಪ್ರಯತ್ನಗಳು ಹಾಗೂ ತಮ್ಮ ಬದ್ಧ ವೈರಿಗಳಾದ ಫ್ರೆಂಚರೊಂದಿಗೆ ಟಿಪ್ಪು ಹೊಂದಿದ್ದ ಸಂಬಂಧಗಳು ಬೆಲೆಯಲ್ಲಿ ಟಿಪ್ಪುವಿನ ವಿಚಾರದಲ್ಲಿ ಮತ್ತಷ್ಟು ದ್ವೇಷ ಭಾವನೆಗಳನ್ನು ಬೆಳೆಸಿದವು, ಟಿಪ್ಪು ಬ್ರಿಟಿಷರ ವಿರುದ್ಧವಾಗಿದ್ದ ಫ್ರೆಂಚರ ಸಹಕಾರ ಪಡೆಯಲು ಪ್ರಯತ್ನಿಸಿ ರಾಯಭಾರಿಯನ್ನು ಕಳುಹಿಸಿದ್ದನು. ಇದು ಬ್ರಿಟಿಷರಿಗೆ ಅಸಮಾಧಾನವನ್ನು ತಂದಿತು. ಟಿಪ್ಪು ಮತ್ತು ಫ್ರೆಂಚರ ನಡುವಿನ ಸ್ನೇಹ ಮುಂದಕ್ಕೆ ತಮ್ಮ ಅಧಿಪತ್ಯಕ್ಕೆ ಮುಳುವಾಗಬಹುದೆಂಬ ಭಾವನೆಗಳು ಬ್ರಿಟಿಷರಲ್ಲಿ ಬೆಳೆಯಿತು.
ಹೊಸ ಷರತ್ತಗಳನ್ನು ಒಳಗೊಂಡಿರುವ ಒಂದು ಒಪ್ಪಂದವನ್ನು ಟಿಪ್ಪುವಿನ ಮೇಲೆ ಹೇರಲಾಯಿತು. ಆದರೆ ಟಿಪ್ಪು ಅಮಾನವೀಯ ಮತ್ತು ಆಸಮಾನ ಷರತ್ತುಗಳನ್ನು ಒಳಗೊಂಡಿದ್ದ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದನು. ಇದು ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧವನ್ನು ಪ್ರಾರಂಭಿಸಿತು,
1799ರಲ್ಲಿ ಯುದ್ಧ ಆರಂಭವಾಯಿತು. ಅಭೇದ್ಯವಾದ ಕೋಟೆಯನ್ನು ಬ್ರಿಟಿಷರು ಬೇಡಿಸಿದರು. ಎರಡೂ ಸೈನ್ಯಗಳು ಪೀರಾವೇಶದಿಂದ ಕಾದಾಡಿದವು ಟಿಪ್ಪು ತನ್ನ ಸೈನ್ಯವನ್ನು ಹುರಿದುಂಬಿಸುತ ಹೋರಾಡಿ 1799ರಲ್ಲಿ ಹತನಾದನು, ಆತನ ಮರಗಳ ಬ್ರಿಟಿಷರಿಗೆ ಇಡೀ ಭಾರತವ ತಮ್ಮ ಕೈವಶವಾದ ಸಂತೋಷವನ್ನು ತಂದಿತು, ನಂತರ ಬ್ರಿಟಿಷರು ಆತನ ಹತೋಟಿಯಲ್ಲಿದ್ದ ಭೌಗೋಳಿಕ ಪ್ರದೇಶಗಳನ್ನು ಮರಾಠರು ಮತ್ತು ನಿಜಾಮನೊಂದಿಗೆ ಹಂಚಿಕೊಂಡರು. ಒಂದು ಸಣ್ಣ ಭೌಗೋಳಿಕ ಪ್ರದೇಶವು ಮೈಸೂರು ಒಡೆಯರ ರಾಜವಂಶದ ಪ್ರತಿನಿಧಿಗೆ ವರ್ಗಾಯಿಸಲ್ಪಟ್ಟಿತ್ತು. ಈ ಪ್ರದೇಶ ತರುವಾಯ ಮೈಸೂರು ಸಂಸ್ಥಾನವೆಂದು ಹೆಸರಾಯಿತು.
ದೊಂಡಿಯಾ ವಾಫ್ 1800
ಆಧುನಿಕ ಕರ್ನಾಟಕದ ಚರಿತ್ರೆಯಲ್ಲಿ ಚಾವಿನ ನಂತರ ಅದರಲ್ಲಿಯೂ ಮುಖ್ಯವಾಗಿ 19ನೆಯ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕಂಡುಬಂದ ಪ್ರತಿಭಟನೆಗಳು ಮತ್ತು ಬಂಡಾಯಗಳು ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ. ಇವುಗಳು ಸಶಸ್ತ್ರ ಬಂಡಾಯಗಳಾಗಿದ್ದವು. ಈ ಸಶಸ್ತ್ರ ಬಂಡಾಯಗಳಲ್ಲಿ ದೋಂಡಿಯಾ ವಾಫ್ನ ನಾಯಕತ್ವದಲ್ಲಿ ಕಂಡುಬಂದಿದ್ದ ಸಶಸ್ತ್ರ ದಂಗೆ ಪ್ರಮುಖವಾಗಿದೆ.
ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು. ಅವನ ಶೌರ್ಯ ಪರಾಕ್ರಮಗಳಿಂದ ಜನ ಅವನನ್ನು ವಾಸ್ ಎಂದು ಕರೆದರು. ಮರಾಠಿಯಲ್ಲಿ ವಾಫ್ ಎಂದರೆ ಹುಲಿ, ಕ್ರಿ.ಶ.1789ರ ಸುಮಾರಿಗೆ ಮೈಸೂರಿನ ಹೈದರಾಲಿಯ ಸೈನ್ಯದಲ್ಲಿ ಒಬ್ಬ ಅಶ್ವಾರೋಹಿ ಸೈನಿಕನಾಗಿ ಸೇರಿ ಕಾಲಾನಂತರ ಸೇನಾನಾಯಕನಾದನು, ಖಾಸಗಿಯಾಗಿ ಒಂದು ಸೈನ್ಯವನ್ನು ಸಜ್ಜುಗೊಳಿಸಿದ ಅವನು ಟಿಪ್ಪುವಿನ ಸೈನ್ಯದಲ್ಲಿ ಸೇವೆ ಸಲ್ಲಿಸಿದನು. ಆತನೊಂದಿಗೆ ಮನಸ್ತಾಪದಿಂದಾಗಿ ಅವನು ಸೆರೆಮನೆ ಸೇರುವಂತಾಯಿತು. ನಾಲ್ಕನೆಯ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಶ್ರೀರಂಗಪಟ್ಟಣದ ಪತನಾನಂತರ ಬ್ರಿಟಿಷರು ಈತನನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿದರು. ತರುವಾಯ ಇವನು ಒಂದು ಸೈನ್ಯವನ್ನು ಸಂಘಟಿಸಿ ಸೈಕ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದಳು.
ಆತನ ಸೈನ್ಯ ದೊಡ್ಡದಾಗಿರಲಿಲ್ಲ. ಅವನು ಟಿಪ್ಪುವಿನ ಸೈನ್ಯದಲ್ಲಿದ್ದ ಅತೃಪ್ತ ಸೈನಿಕರು, ಅಧಿಕಾರದಿಂದ ಮುಕ್ತಗೊಳಿಸಲ್ಪಟ್ಟ ಪಾಳೆಯಗಾರರು ಮೊದಲಾದವರನ್ನು ಸಂಘಟಿಸಿ ಒಂದು ಸೈನ್ಯವನ್ನು ಸುಸಜ್ಜಿತಗೊಳಿಸಿ ಬಂಡಾಯದ ಬಾವುಟವನ್ನು ಹರಿಸಿದನು ಶಿವಮೊಗ್ಗ ಮತ್ತು ಬಿದನೂರಿನ ಕೋಟೆಗಳನ್ನು ಪರಪಡಿಸಿಕೊಂಡನು. ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ವಿಫಲ ಪ್ರಯತ್ನಗಳನ್ನು ನಡೆಸಿದರು. ಗವರ್ನರ್ ಜನರಲ್ನಾಗಿದ್ದ ಲಾರ್ಡ್ ವೆಲ್ಲೆಸಿ ಬಂಡಾವನ್ನು ಕಲು ಪಾರಂಭಿಸಿದನು.
ದೋಂಡಿಯಾನ ನಿಯಂತ್ರಣದಲ್ಲಿದ್ದ ಶಿವಮೊಗ್ಗ, ಹೊನ್ನಾಳಿ, ಪರಿಹರ ಮೊದಲಾದವುಗಳ ಮೇಲೆ ಆಕ್ರಮಣ ನಡೆಸಿತು. ದೋಂಡಿಯಾ ತನ್ನ ನೆಲೆಯನ್ನು ಕಳೆದುಕೊಂಡನು. ಶಿಕಾರಿಪುರವನ್ನು ಬ್ರಿಟಿಷರು ವಶಪಡಿಸಿಕೊಂಡ ತರುವಾಯ ದೋಂಡಿಯಾ ನಿಜಾಮನ ಹತೋಟಿಯಲ್ಲಿದ್ದ ಗುತ್ತಿಯ ಕಡೆಗ ಪಲಾಯನಗೈದನು. ಆಗ ನಿಜಾಮನು ಗುತ್ತಿಯನ್ನು ಮುತ್ತಿದಾಗ ಅನಿವಾರ್ಯವಿಲ್ಲದೆ ದೋಂಡಿಯಾ ಮರಾಠರ ಪ್ರದೇಶಕ್ಕೆ ಓಡಿಹೋದನು. ಮರಾಠ ಸೈನ್ ಅವನನ್ನು ಸೋಲಿಸಿ ಅವನ ಶಸ್ತ್ರಾಸ್ತ್ರಗಳು, ಒಂಟಿ ಮತ್ತು ಆನೆಗಳನ್ನು ವಶಪಡಿಸಿಕೊಂಡರೂ ಧೃತಿಗೆಡದ ದೋಂಡಿಯಾ ತನ್ನ ಹೋರಾಟವನ್ನು ಮುಂದುವರಿಸಿದನು.
ಆನೇಕ ಅತೃಪ್ತ ಪಾಳೆಯಗಾರರು ದೋಂಡಿಯಾನಿಗೆ ಪ್ರೋತ್ಸಾಹಿಸಿದರು. ಮಲಬಾರಿನ ಮಾಹೆಯಲ್ಲಿದ್ದ ಫ್ರೆಂಚರು ಆತನಿಗೆ ಸಹಾಯ ಹಸ್ತವನ್ನು ನೋಡಿದರು, ಹರಿಹರ, ಚಿತ್ರದುರ್ಗ, ಶಿಕಾರರ, ಸವಣೂರು, ರಾಣೆಬೆನ್ನೂರು, ಕಿತ್ತೂರು ಮತ್ತು ಲೋಂಡಾ ಹೀಗೆ ವಿಶಾಲ ಭೌಗೋಳಿಕ ಪ್ರದೇಶದಲ್ಲಿ ಬ್ರಿಟಿಷರ ಸೈನ್ಯ ಆತನನ್ನು ಹಿಂಬಾಲಿಸಿತು, ಶಿರಹಟ್ಟೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬ್ರಿಟಿಷ್ ಸೈನ್ಯ ದೋಂಡಿಯಾನ ಸೈನ್ಯದ ಅನೇಕ ಸೈನಿಕರನ್ನು ಹತ ಮಾಡಿತು.
ದೋಂಡಿಯಾ ವಾಘನ ಅಂತ್ಯ : ಲಾರ್ಡ್ ವೆಲ್ಲ ಆತನಿಗೆ ಅಂತ್ಯವನ್ನು ಹಾಡಲು ನಿರ್ಧರಿಸಿದನು. ದೇಶಿಯ ಸಂಸ್ಥಾನಗಳ ರಾಜರ ಸಹಾಯವನ್ನು ಬ್ರಿಟಿಷರು ಕೋರಿದರು. ಶಿಕಾರಿಪುರದ ಕೋಟೆಯನ್ನು ಪುನಃ ಗೆದ್ದುಕೊಂಡ ದೋಂಡಿಯಾನ ಸೈನ್ಯವನ್ನು ಬ್ರಿಟಿಷ್ ಸೈನ್ಯ ಜಮುರಿಸಿತು. ತುಂಗಭದ್ರಾ ಮತ್ತು ಮಲಪ್ರಭಾ ನದಿಗಳ ನಡುವಿನ ಪ್ರದೇಶದ ವಿಶಾಲ ಭೂಪ್ರದೇಶದಲ್ಲಿ ವಿರ್ಭೀತಿಯಿಂದ ಸಂಚರಿಸುತ್ತಿದ್ದ ದೋಂಡಿಯಾನ ಸನವನ್ನು ಸೋಲಿಸಲು ಟಿಷರು ಪ್ರಯತ್ನಿಸಿದರು. జిల్లా ದಿಕ್ಕುಗಳಿಂದಲೂ ಅತನನ್ನು ಬ್ರಿಟಿಷ್ ಸೈನ್ಯ ಸುತ್ತುವರೆಯಿತು. ರಾಯಚೂರಿನಿಂದ ಹೊರಟ ಅವನನ್ನು ಹಿಂಬಾಲಿಸಲಾಯಿತು, ನಿಜಾಮ ಮತ್ತು ಮರಾಠರ ಸೈನ್ಯದ ನಡುವೆ ಸಿಲುಕಿದ ದೋಂಡಿಯಾನ ಸುತೃತ್ವದಲ್ಲಿನ ಸೈನ್ಯದ ಮೇಲೆ ಬ್ರಿಟಿಷರು ಯಾಪಲಬೆಡವಿ ಎಂಬ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಕೊಣಿಗಳ ಎಂಬ ಸ್ಥಳದಲ್ಲಿ ಆತನನ್ನು ಹತ್ಯೆಗೈದರು, ತಮ್ಮ ನಾಯಕನ ಹತ್ಯೆಯ ನಂತರ ಅಳಿದುಳಿದ ಸೈನಿಕರು ಚದುರಿದರು. ಬಂಡುಕೋರರಿಂದ ಆಪಾರ ಪ್ರಮಾಣದ ಮದ್ದುಗುಂಡುಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಬ್ರಿಟಿಷರು ವಶಪಡಿಸಿಕೊಂಡರು
ಕಾಮೆಂಟ್ ಪೋಸ್ಟ್ ಮಾಡಿ